Manjunath Raju

BBMP Corporator

Kadu Malleshwara Ward, Bengaluru

0

No products in the cart.

Manjunath Raju

BBMP Corporator

Kadu Malleshwara Ward, Bengaluru

Blog Post

Property ID ಯಶೋಗಾಥೆ

November 16, 2021 Uncategorized
Property ID ಯಶೋಗಾಥೆ

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ‘ನಗರೀಕರಣ’ವೆಂಬುದು ಸ್ವಾಭಾವಿಕ ಪ್ರಕ್ರಿಯೆ. ನಗರಗಳು ಬೆಳೆದಂತೆ ಅಭಿವೃದ್ಧಿಯ ಜೊತೆಜೊತೆಗೇ ಸವಾಲುಗಳು ಬೆಳೆಯುತ್ತಾ ಹೋಗುತ್ತವೆ. ಅವುಗಳನ್ನು ಸಮರ್ಪಕವಾಗಿ ಎದುರಿಸಿ ಉತ್ತಮ ಆಡಳಿತ ನೀಡುವಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಮುಖ್ಯಪಾತ್ರ ವಹಿಸುತ್ತವೆ.

ಸುಗಮ ಸಂಚಾರ ವ್ಯವಸ್ಥೆ, ಆರೋಗ್ಯ, ನೈರ್ಮಲ್ಯ, ನೀರು ಪೂರೈಕೆ ಹೀಗೆ ಹತ್ತು ಹಲವಾರು ಮೂಲಸೌಲಭ್ಯಗಳನ್ನು ಒದಗಿಸುವ ಸ್ಥಳೀಯ ಸಂಸ್ಥೆಗಳ ದಕ್ಷ, ಸದೃಢ, ಪಾರದರ್ಶಕ ಆಡಳಿತ ವ್ಯವಸ್ಥೆಯಡಿ ಒಂದು ಉತ್ತಮ ನಗರ ರೂಪುಗೊಳ್ಳುತ್ತದೆ. ಆದರೆ ಇದನ್ನು ಸಾಧಿಸುವುದು ಸುಲಭದ ಮಾತಲ್ಲ, ಹೆಚ್ಚುತ್ತಿರುವ ಜನಸಂಖ್ಯೆ, ವಲಸಿಗರು, ಸಂಚಾರ ದಟ್ಟಣೆ, ಮೂಲಸೌಕರ್ಯಗಳ ಮೇಲಿನ ಒತ್ತಡ, ಯಥಾಸ್ಥಿತಿ ಕಾಯ್ದುಕೊಳ್ಳಲು ಇಚ್ಚಿಸುವ ಅಧಿಕಾರಿ ವರ್ಗದ ನಡುವೆ ಸುಸ್ಥಿರ, ಸರ್ವರನ್ನೊಳಗೊಂಡ ಜನಸ್ನೇಹಿ ಆಡಳಿತ‌ ನೀಡುವುದು ಯಾವುದೇ ಸಾರ್ವಜನಿಕ ಸಂಸ್ಥೆಗೆ ಸವಾಲಿನ ಕೆಲಸವೇ ಸರಿ.

ಆದರೆ ಬೆಂಗಳೂರಿನಂತಹ ಮಹಾನಗರಿಯಲ್ಲಿ ಹುಟ್ಟಿ ಬೆಳೆದು, ಅಲ್ಲಿನ ನಗರಾಡಳಿತದಲ್ಲಿ ಸೇವೆಸಲ್ಲಿಸಿದ ಅನುಭವದಿಂದ ನಾನು ಕಂಡುಕೊಂಡಂತೆ ಅಧಿಕಾರ ವಿಕೇಂದ್ರೀಕರಣ, ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನದ ಅಳವಡಿಕೆ ಹಾಗೂ ಆರ್ಥಿಕ ಸ್ವಾವಲಂಬನೆಯಿಂದ ಇದನ್ನು ಸಾಧಿಸಲು ಸಾಧ್ಯವಿದೆ.

ತನ್ನ ಕ್ಷೇತ್ರದ ವಿಧಾನಸಭಾ/ ಲೋಕಸಭಾ ಸದಸ್ಯರನ್ನು ನೇರವಾಗಿ ತಲುಪಲಾರದೆ ತಾನೇ ಚುನಾಯಿಸಿದ ತನ್ನ ವಾರ್ಡ್ ನ ಕಾರ್ಪೊರೇಟರ್/ ಕೌನ್ಸಿಲರ್ ಗಳ ಬಳಿ ಬರುವ ಒಬ್ಬ ಸಾಮಾನ್ಯ ವ್ಯಕ್ತಿಯ ಸಮಸ್ಯೆಯನ್ನು ಪರಿಹರಿಸಲು ಸಂಸ್ಥೆಗೆ ಸಾಕಷ್ಟು ಅಧಿಕಾರದ ಅವಶ್ಯಕತೆಯಿರುತ್ತದೆ. ಹಾಗಾಗಿ ನಿಜವಾದ ಅರ್ಥದಲ್ಲಿ ‘ ಅಧಿಕಾರ ವಿಕೇಂದ್ರೀಕರಣ’ ಸಾಧಿಸುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ.

ಆನಂತರ ಪೂರ್ಣಪ್ರಮಾಣದಲ್ಲಿ ‘ಮಾಹಿತಿ ತಂತ್ರಜ್ಞಾನವನ್ನು’ ಅಳವಡಿಸಿ ಸಾರ್ವಜನಿಕರಿಗೆ ಮುಕ್ತವಾಗಿರುವುದರಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆ , ಹೊಣೆಗಾರಿಕೆ, ದಕ್ಷತೆ, ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತಾ ಹೋಗಬಹುದು. ಇನ್ನೊಂದೆಡೆ ಡಿಜಿಟಲೀಕರಣದ ಮೂಲಕ ಸ್ಥಳೀಯ ಸಂಸ್ಥೆಯ ವ್ಯಾಪ್ತಿಗೆ ಸೇರದ ಸಂಸ್ಥೆಗಳನ್ನು ಉದಾಹರಣೆಗೆ; ನಗರಾಭಿವೃದ್ಧಿ ಪ್ರಾಧಿಕಾರ, ವಿದ್ಯುತ್ ಪೂರೈಕೆ ಮಂಡಳಿಗಳು, ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಇತ್ಯಾದಿಗಳನ್ನು ಒಂದೇ ಸೂರಿನಡಿ ತರಲು ಅವಕಾಶವಿದ್ದು, ಇದರಿಂದ ಪ್ರತಿಯೊಬ್ಬರು ಯಾವುದೇ ತೊಡಕಿಲ್ಲದೆ ಸರಾಗವಾಗಿ ವ್ಯವಸ್ಥೆಯೊಡನೆ ವ್ಯವಹರಿಸಲು, ಭಾಗವಹಿಸಲು ಸಾಧ್ಯವಾಗುತ್ತದೆ.

ಇನ್ನೊಂದು ಪ್ರಮುಖ ಅಂಶ ‘ ಆರ್ಥಿಕ ಸ್ವಾವಲಂಬನೆ’. ಯಾವುದೇ ಸಂಸ್ಥೆ ಸದೃಢವಾಗಿ ಕಾರ್ಯನಿರ್ವಹಿಸಬೇಕಾದರೆ ಆ ಸಂಸ್ಥೆ ಆರ್ಥಿಕವಾಗಿ ಪ್ರಬಲವಾಗಿರಬೇಕು. ಇಲ್ಲದಿದ್ದಲ್ಲಿ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ( ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಯನ್ನೇ ನಿದರ್ಶನವಾಗಿ ತೆಗೆದುಕೊಂಡು ಗಮನಿಸುವುದಾದರೆ, ಬೆಂಗಳೂರು ನಗರಾಡಳಿತ 2000ನೇ ಇಸವಿಯ ನಂತರ ಬಿಬಿಎಂಪಿ ಎಂದಾದ ಸಂದರ್ಭದಲ್ಲಿ ಆಡಳಿತ ವ್ಯಾಪ್ತಿ ಹಿಂದಿಗಿಂತ ನಾಲ್ಕು ಪಟ್ಟು ಹೆಚ್ಚಾಯಿತು.

ಬದಲಾದ ಸಂದರ್ಭದಲ್ಲಿ ಹೆಚ್ಚಿನ ಜವಾಬ್ದಾರಿಯೊಂದಿಗೆ ಅನೇಕ ಸವಾಲುಗಳು ಎದುರಾದವು. ತನ್ನ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ ಪ್ರದೇಶಗಳಲ್ಲಿನ ಬೆಳವಣಿಗೆ ನಿಯಮಬದ್ಧವಾಗಿರಲಿಲ್ಲ. ಅಲ್ಲದೇ ನಂತರದ ದಿನಗಳಲ್ಲಿ ಬದಲಾದ ನೀತಿಯನ್ವಯ ಬಿಬಿಎಂಪಿ  ಮತ್ತು ರಾಜ್ಯದ ನಡುವೆ ಹಂಚಿಕೆಯಾಗುತ್ತಿದ್ದ ಆದಾಯವು ನೇರವಾಗಿ ರಾಜ್ಯದ ಬೊಕ್ಕಸಕ್ಕೆ ಸೇರುವಂತಾಗಿ, ಹಣಕಾಸಿನ ವಿಷಯದಲ್ಲಿ ನಗರಾಡಳಿತವು ರಾಜ್ಯವನ್ನು ಹೆಚ್ಚು ಅವಲಂಬಿಸುವಂತಾಯಿತು. ನನ್ನ ಪ್ರಕಾರ ಇದು ವಿಕೇಂದ್ರೀಕರಣದ ದೃಷ್ಟಿಯಿಂದ ವ್ಯತಿರಿಕ್ತವಾದ ಹೆಜ್ಜೆ. ಈ ಸಂದರ್ಭದಲ್ಲಿ ಬಿಬಿಎಂಪಿ ತನ್ನ ಆದಾಯ ಮೂಲಗಳನ್ನು ವ್ಯವಸ್ಥಿತಗೊಳಿಸಿಕೊಳ್ಳುವುದು ನಗರದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಅತ್ಯಂತ ಅವಶ್ಯ ಕಾರ್ಯವಾಗಿತ್ತು.

ಬಿಬಿಎಂಪಿಯ ಮುಖ್ಯ ಆದಾಯ ಮೂಲಗಳೆಂದರೆ, ಆಸ್ತಿ ತೆರಿಗೆ, ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ ಹಾಗೂ ವ್ಯಾಪಾರ ಪರವಾನಗಿ ಶುಲ್ಕಗಳು. 2010ರಲ್ಲಿ ತೆರಿಗೆ ಮತ್ತು ಹಣಕಾಸಿನ ಸಮಿತಿಯ ಸದಸ್ಯನಾದಂತಹ ಸಂದರ್ಭದಲ್ಲಿ ತೆರಿಗೆ ಸಂಗ್ರಹಣೆಯಲ್ಲಿದ್ದ ಲೋಪದೋಷಗಳನ್ನು ಗಮನಿಸಿ, ಸರಿಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ನಡೆಸಿದಾಗ ವಾಸ್ತವಾಂಶಗಳು ತೆರೆದುಕೊಳ್ಳುತ್ತಾ ಹೋದವು. ಉದಾಹರಣೆಗೆ; ಆಸ್ತಿ ತೆರಿಗೆಯನ್ನು ತೆಗೆದುಕೊಂಡರೆ ಆಗ ಆಸ್ತಿ ತೆರಿಗೆ ಲೆಕ್ಕಚಾರ ಸ್ವಯಂ ಘೋಷಣಾ ವ್ಯವಸ್ಥೆಯಾಗಿತ್ತು. ತೆರಿಗೆ ನಿರೀಕ್ಷಕರ/ ಕಚೇರಿಯಲ್ಲಿ ನೇರವಾಗಿ ತೆರಿಗೆ ಪಾವತಿಸುವ ಮೂಲಕ ತೆರಿಗೆ ಸಂಗ್ರಹಿಸಲಾಗುತ್ತಿತ್ತು.

ಪಾಲಿಕೆಗೆ ಆಸ್ತಿ ತೆರಿಗೆಯಿಂದ ಸಂಗ್ರಹವಾಗುತ್ತಿದ್ದ ಆದಾಯ 2010-11 ರ ಅವಧಿಯಲ್ಲಿ 550-560 ಕೋಟಿಯಷ್ಟಿದ್ದು ಆಸ್ತಿಗಳ ಸಂಖ್ಯೆ ಸುಮಾರು 8 ಲಕ್ಷದಷ್ಟಿತ್ತು. ಆದರೆ ಇದರ ಸತ್ಯಾಸತ್ಯತೆ ತಿಳಿಯುವ ಕುತೂಹಲದಿಂದ ಇತರ ಸಂಸ್ಥೆಗಳ ದತ್ತಾಂಶಗಳನ್ನು ಪರಿಶೀಲಿಸಿದಾಗ ಉದಾಹರಣೆಗೆ; ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯಲ್ಲಿನ ಬಳಕೆದಾರರ ಸಂಖ್ಯೆ ಸುಮಾರು 17 ಲಕ್ಷ. ಬೆಸ್ಕಾಂನ ಮೀಟರ್ ಗಳ ಸಂಖ್ಯೆ ಸುಮಾರು 20 ಲಕ್ಷ ವಿರುವುದು ಕಂಡುಬಂದು ಎಷ್ಟು ಆಸ್ತಿಗಳು ತೆರಿಗೆ ವ್ಯಾಪ್ತಿಯನ್ನು ತಪ್ಪಿಸಿಕೊಂಡಿರುವುದು ಸ್ಪಷ್ಟವಾಯಿತು.

ಹಾಗೆಯೇ ತೆರಿಗೆ ಪಾವತಿಯಲ್ಲಿಯೂ ಸಾಕಷ್ಟು ವ್ಯತ್ಯಾಸಗಳಿದ್ದವು ಉದಾಹರಣೆಗೆ; ನಿವೇಶನದ ವಿಸ್ತೀರ್ಣ ಸಮಾನವಾಗಿದ್ದರು ತೆರಿಗೆ ಯಲ್ಲಿನ ವ್ಯತ್ಯಾಸ, ಬಾಡಿಗೆ ನೀಡಿರುವ ಕಟ್ಟಡಗಳನ್ನು ಸ್ವಂತ ಬಳಕೆ ಎಂದು ತೋರಿಸುವುದು ಇತ್ಯಾದಿ.  ಇನ್ನೊಂದೆಡೆ ಪ್ರಾಮಾಣಿಕ ಪಾವತಿದಾರರು ಕಚೇರಿಗಳಿಗೆ ಅಲೆದಾಟ, ದಂಡ ಪಾವತಿ ಹೀಗೆ ಅನೇಕ ತೊಂದರೆ ಅನುಭವಿಸುತ್ತಿದ್ದರು.

2011-12 ರಲ್ಲಿ ತೆರಿಗೆ ಮತ್ತು ಹಣಕಾಸಿನ ಸಮಿತಿಯ ಅಧ್ಯಕ್ಷನಾದ ಸಂದರ್ಭದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಜನಸ್ನೇಹಿ, ಪಾರದರ್ಶಕ ತೆರಿಗೆ ಸಂಗ್ರಹಣೆಯನ್ನು ಸಾಧಿಸುವ ನಿಟ್ಟಿನಲ್ಲಿ GIS ಆಧಾರಿತ ಆಸ್ತಿ ದಾಖಲಾತಿ ಯೋಜನೆ ಆರಂಭಿಸಿ ಪ್ರತಿಯೊಬ್ಬ ವ್ಯಕ್ತಿಗೆ ಗುರುತಿನ ಸಂಖ್ಯೆ ಇರುವಂತೆ ಪ್ರತಿಯೊಂದು ಆಸ್ತಿಗೂ ಪ್ರತ್ಯೇಕ ಆಸ್ತಿ ಗುರುತಿನ ಸಂಖ್ಯೆ (PID) ನೀಡಲಾಯಿತು. ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಯಿತು. ಈ ಯೋಜನೆಯಿಂದ 16.2 ಲಕ್ಷ ಆಸ್ತಿಗಳು ಗುರುತಿಸಲ್ಪಟ್ಟು, ಆಸ್ತಿ ತೆರಿಗೆಯಿಂದ ಸಂಗ್ರಹವಾಗುತ್ತಿದ್ದ ಆದಾಯ 6 ರಿಂದ 7 ಪಟ್ಟು ಹೆಚ್ಚಿತು. ಅಲ್ಲದೇ ಅಕ್ರಮ ಆಸ್ತಿ ಅತಿ ಕ್ರಮಗಳನ್ನು ಗುರುತಿಸಲು ಸಹಾಯಕವಾಯಿತು.

2011-12 ರಲ್ಲಿ ಅನುಷ್ಠಾನಗೊಂಡ ಈ ಯೋಜನೆ ದೇಶದಲ್ಲೇ ಮೊದಲ ಬಾರಿಯಾಗಿದ್ದು ಯೋಜನಾ ಆಯೋಗದ ಆಗಿನ ಉಪಾಧ್ಯಕ್ಷರಾದ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವರಿಂದ ಗುರುತಿಸಲ್ಪಟ್ಟು ‘ ಜವಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ’ ಯೋಜನೆಯಡಿ ಯಾವುದೇ ಬದಲಾವಣೆಯಿಲ್ಲದೆ ದೇಶದಾದ್ಯಂತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಯಿತು. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸಿಸಲ್ಪಟ್ಟು ಪ್ರತಿಷ್ಠಿತ WEGO ಸಂಸ್ಥೆಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಪಾರದರ್ಶಕ ತೆರಿಗೆ ಸಂಗ್ರಹಣೆಯ ಉದ್ದೇಶದೊಂದಿಗೆ ಜಾರಿಗೊಳಿಸಿದ ತಂತ್ರಜ್ಞಾನಾಧಾರಿತವಾದ ಯೋಜನೆ ಆದಾಯವನ್ನು ಹೆಚ್ಚಿಸುವುದರೊಂದಿಗೆ ತನ್ಮೂಲಕ ಮೂಲಸೌಲಭ್ಯ ಅಭಿವೃದ್ಧಿ, ಆರೋಗ್ಯ ಸೇರಿದಂತೆ ಇತರ ವಿಭಾಗಗಳ ಯೋಜನೆಗಳ ಹಣ ವಿನಿಯೋಗಕ್ಕೆ ಪುಷ್ಟಿ ನೀಡಿದ್ದನ್ನು ಗಮನಿಸಿದಾಗ ಸಾರ್ವಜನಿಕ ಸೇವೆಯಲ್ಲಿ ತಂತ್ರಜ್ಞಾನದ ಅಳವಡಿಕೆಯಿಂದ ಏನೆಲ್ಲಾ ಸಾಧಿಸಲು ಸಾಧ್ಯವಿದೆ ಎಂಬುದು ಕಣ್ಮುಂದೆ ಬರುತ್ತದೆ.

ಇಷ್ಟು ವರ್ಷಗಳ ಸಾರ್ವಜನಿಕ ಕ್ಷೇತ್ರದ ಅನುಭವದಲ್ಲಿ ನಾನು ಕಂಡುಕೊಂಡಂತೆ ಒಂದು ನಗರದ ಅಭಿವೃದ್ಧಿ, ಜನರ ಜೀವನ ಮಟ್ಟ ಸುಧಾರಣೆ, ಉತ್ತಮ ಆಡಳಿತ ವ್ಯವಸ್ಥೆ ನಿರ್ಮಾಣಕ್ಕಾಗಿ ಎಷ್ಟು ಶ್ರಮಿಸಿದರು ಕಡಿಮೆಯೇ; ಬದಲಾವಣೆಯ ದಾರಿಯ ಆರಂಭದಲ್ಲಿರುವ ನಾವು ಕ್ರಮಿಸಬೇಕಾದ ದೂರ ಸಾಕಷ್ಟಿದೆ.

————————————–

ಮಾಧ್ಯಮದಲ್ಲಿ PID ಕುರಿತು:

Indian Express: https://www.newindianexpress.com/cities/bengaluru/2012/oct/13/palikes-pid-system-bags-e-governance-award–414770.html

News 18: https://www.news18.com/news/india/bwssb-to-use-pids-to-increase-revenue-479833.html

Deccan Herald: https://www.deccanherald.com/amp/content/266148/palike-cuts-short-devious-ways.html#aoh=16337169058532&referrer=https%3A%2F%2Fwww.google.com&amp_tf=From%20%251%24s

Deccan Herald: https://www.deccanherald.com/content/429528/why-tar-good-road.html

Musings

Liveability, quality of life, ease of living, Bengaluru for all, remuneration and livelihood opportunities, assured services at affordable prices, safe secure efficient accessible affordable mobility, walkable streets, access to metro and bus, special fares for women, Services water supply, drainage, solid waste streets electricity, transport, Revenue mobilization – increase it by coverage and efficient collection, reduce wasteful expenditure and not add additional burden, Transparency in governance, Energy uses and emissions, inventions in renewable sources on a larger scale, Green city initiatives.

Bengaluru
Namma uru

safe city

secure city

healthy city

city of opportunity

green city

future city

Green city

blue city

Education city

Children are our future

Liveability index

natural resources

development

enhanced quality of life

education

Bangalore A Future Ready City

Write a comment